ಪೋಸ್ಟ್‌ಗಳು

ಜೂನ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೌರಾಣಿಕ-ಲೇಖನ : shoorpanakhi

      ರಾಮಾಯಣದ ಎಲ್ಲಾ ಘಟನೆಗಳಿಗೂ ಮೂ¯ ಕಾರಣರಾದವರು ಇಬ್ಬರು. ಒಬ್ಬಳು ರಾಮನನ್ನು ಕಾಡಿಗಟ್ಟಿದ ಕೈಕೇಯಿಯಾದರೆ ಮತ್ತೊಬ್ಬಳು ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖಿ. ಶೂರ್ಪನಖಿ ಲಂಕಾಧಿಪತಿ ರಾವಣನ ತಂಗಿ. ರಾಮಾಯಣದ ಅನುಸಾರ ಶೂರ್ಪನಖಿಗೆ ಮದುವೆಯಾಗಿರುತ್ತದೆ. ಆದರೆ ಅವಳ ಗಂಡನನ್ನು ರಾವಣನೇ ಕೊಲ್ಲಿಸಿರುತ್ತಾನೆ. ಹಾಗಾಗಿ ಅಣ್ಣನ ಮೇಲಿನ ಕೋಪದಿಂದ ದಂಡಕಾರಣ್ಯದಲ್ಲಿ ತಿರುಗುತ್ತಿರುತ್ತಾಳೆ. ಹೀಗೆ ಅರಣ್ಯದಲ್ಲಿ ತಿರುಗಾಡುತ್ತಿದ್ದಾಗ ಪಂಚವಟಿಯಲ್ಲಿ ಕಂಡ ರಾಮನಿಗೆ ಮನಸೋಲುತ್ತಾಳೆ ಶೂರ್ಪನಖಿ. ಆದರೆ ತನ್ನ ಮನದಾಸೆಯನ್ನು ರಾಮನಲ್ಲಿ ಹೇಳಿ. ನಂತರ ಆ ಬಯಕೆಯು ಕೈಗೂಡದೆ ತನ್ನ ಕಿವಿ-ಮೂಗು ಕಳೆದುಕೊಳ್ಳುತ್ತಾಳೆ. ಆದ ಅಪಮಾನ ತಾಳಲಾಗದೇ ಈ ಬಗ್ಗೆ ತನ್ನ ಅಣ್ಣ ಖರಾಸುರನಿಗೆ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ಧ ಮಾಡಿ ಮಡಿಯುತ್ತಾನೆ. ನಂತರ ಶೂರ್ಪನಖಿಯು ಲಂಕೆಯಲ್ಲಿರುವ ತನ್ನ ಅಣ್ಣ ರಾವಣನಲ್ಲಿಗೆ ದೂರು ಕೊಡಲು ಹೋದವಳು, ಸೀತೆಯ ಗುಣ ಮತ್ತು ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ-ರಾವಣರ ಯುದ್ಧದಲ್ಲಿ ಕೊನೆಯಾಗುತ್ತದೆ. ಕಾಡಿನಲ್ಲಿ ತಿರುಗಾಡುತ್ತಿದ್ದಾಗ ಶೂರ್ಪನಖಿ ರಾಮನನ್ನು ಕಂಡು ಇಷ್ಟ ಪಟ್ಟದ್ದು ತಪ್ಪಲ್ಲ. ಹೆಣ್ಣು-ಗಂಡುಗಳು ಭಿನ್ನಲಿಂಗಿಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆಗೊಳಗಾಗುವುದು ಸಹಜ. ಆದರೆ ಪ್ರೀತಿಸಲು ಅಥವಾ ಪ್ರೇಮಿಸಲು ಅವರೂ ತಮ್ಮ

ಪೌರಾಣಿಕ-ಲೇಖನ : ಹಿಡಿಂಬೆ

ಇಮೇಜ್
ಎಲ್ಲಾ ಕ್ರಿಯೆಗಳಿಗೂ ಒಂದು ಮೂಲ ಕಾರಣ ಅಂತ ಇದ್ದೇ ಇರುತ್ತದೆ. ಎಂದೋ ಸಂಭವಿಸಬೇಕಾದ ಒಂದು ಮಹಾಯುದ್ಧಕ್ಕೆ ಬಹಳ ಪೂರ್ವದಿಂದಲೇ ತಯಾರಿ ಪ್ರಾರಂಭವಾಗಿರುತ್ತದೆ. ಕುರುಕ್ಷೇತ್ರ ಯುದ್ಧ ನಡೆದದ್ದು ಕೌರವ-ಪಾಂಡವರ ನಡುವೆಯಾದರೂ ಅದಕ್ಕೆ ಮುನ್ನುಡಿ ಬರೆದವಳು ಸತ್ಯವತಿ. ಶಂತನು ಸತ್ಯವತಿಯನ್ನು ಕಂಡು ಮೋಹಗೊಳ್ಳದಿದ್ದರೆ, ಸತ್ಯವತಿ ಅವನಿಗೆ ಮದುವೆಯಾಗಲು ಷರತ್ತು ಹಾಕದಿದ್ದರೆ, ಭೀಷ್ಮ ಆಜೀವ ಬ್ರಹ್ಮಚರ್ಯದ ಕಠಿಣ ನಿರ್ಧಾರ ಕೈಗೊಳ್ಳದಿದ್ದರೆ ಮಹಾಭಾರತ ಯುದ್ಧ ನಡೆಯುತ್ತಲೇ ಇರಲಿಲ್ಲ. ಹಾಗೆಯೇ ಆ ಮಹಾಯುದ್ಧದಲ್ಲಿ ಅರ್ಜುನನು ಕರ್ಣನ ಶಕ್ತ್ಯಾಯುಧಕ್ಕೆ ಬಲಿಯಾಗದಂತೆ ತಡೆಯಲು ಪರೋಕ್ಷ ಕಾರಣನಾಗುವವನು ಘಟೋತ್ಕಚ. ಇವನು ಹಿಡಿಂಬೆಯ ಮಗ.  ಹಿಡಿಂಬೆ ಹುಟ್ಟಿನಿಂದ ರಾಕ್ಷಸಿಯಾದರೂ ಮಾನವರ ಸಕಲ ಗುಣ ಉಳ್ಳವಳು. ಉದಾರಿ, ಪ್ರೇಮಮಯಿ, ವೇದವ್ಯಾಸರ ಒಪ್ಪಂದದಂತೆ ತನಗೆ ಮಗ ಹುಟ್ಟುವವರೆಗೆ ಮಾತ್ರವೇ ಭೀಮನನ್ನು ಗಂಡನಾಗಿ ಪಡೆದಿದ್ದರೂ, ಜೀವನ ಪೂರ್ತಿ ಅವನ ನೆನಪಿನಲ್ಲಿಯೇ ಕಳೆಯುತ್ತಾಳೆ. ಆದರ್ಶ ನಾರಿಯಾಗಿ ಗಮನ ಸೆಳೆಯುತ್ತಾಳೆ. ಇದು ರಾಕ್ಷಸರ ಸ್ವಚ್ಚಂದ ಮನೋಭಾವದ ವಿರೋಧಾಭಾಸವಾಗಿ ಕಂಡು ಬರುತ್ತದೆ. ಎಲ್ಲೋ ನಿಮಿತ್ತವಾಗಿ ಬರುವ ಹಿಡಿಂಬೆ ಭೀಮ ಅವಳಿಂದ ದೂರಾದಾಗ ಓದುಗರ ಮನಸ್ಸಿನಿಂದಲೂ ಮರೆಯಾಗುತ್ತಾಳೆ.  ಪಂಚ ಪಾಂಡವರು ತಮ್ಮ ತಾಯಿ ಕುಂತಿಯೊಂದಿಗೆ ಅರಗಿನ ಅರಮನೆಯ ಗುಪ್ತದ್ವಾರದಿಂದ ತಪ್ಪಿಸಿಕೊಂಡು ರಾತ್ರೋ ರಾತ್ರಿ ಕಾಡಿನಲ್ಲಿ ನಡೆಯುತ್ತಾ ಮುನ