A C Bradley's ಕಾವ್ಯಕ್ಕಾಗಿ ಕಾವ್ಯ : ಎಂ.ಎ.ಕನ್ನಡ
ಕವಿ ಪರಿಚಯ: ಎ.ಸಿ. ಬ್ರ್ಯಾಡ್ಲೀ (1851) ಇಂಗ್ಲೀಷ್ ಸಾಹಿತ್ಯದ ವಿದ್ವಾಂಸ. ತಮ್ಮ ತಂದೆಯ ಇಪ್ಪತ್ತೊಂದು ಮಕ್ಕಳಲ್ಲಿ ಕೊನೆಯವರು.ಓದಿನ ನಂತರ "ಲಿವರ್ ಪೂಲ್" ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರು. ನಂತರ ಲಿವರ್ ಪೂಲ್, ಗ್ಲಾಸ್ಗೋ, ಎಡಿನ್ ಬರ್ಗ್, ಡರ್ಹಾಮ್ ವಿಶ್ವವಿದ್ಯಾನಿಲಯಗಳು ನೀಡಲು ಬಂದ ಗೌರವ ಡಾಕ್ಟರೇಟ್ ಅನ್ನು ನಿರಾಕರಿಸಿದರು. ಬ್ರಾಡ್ಲೀ ಮದುವೆ ಮಾಡಿಕೊಂಡಿಲ್ಲ, ಅವಿವಾಹಿತರು. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ರಿಸರ್ಚ್ ಫೆಲೋಶಿಪ್ ಸ್ಥಾಪಿಸಿದ್ದಾರೆ. ಬ್ರಾಡ್ಲೀ ಅವರು ಬರೆದಿರುವ " ಷೇಕ್ಸ್ ಪಿಯರಿಯನ್ ಟ್ರಾಜೆಡಿ " ಕೃತಿಯು ಎಲ್ಲರಿಂದಲೂ ಅತ್ಯಂತ ಕಟು ಟೀಕೆಗೆ ಒಳಗಾಗಿದ್ದರೂ, ಇಂದಿಗೂ ಸಹ ಅತ್ಯುತ್ತಮ ಮತ್ತು ಪ್ರಭಾವಿ ಕೃತಿಯಾಗಿದೆ. ಈ ಕೃತಿಯು ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣ ಕಂಡಿದೆ. ಬ್ರಾಡ್ಲೀಯ ಸಿದ್ಧಾಂತವಾದ " ಕಾವ್ಯಕ್ಕಾಗಿ ಕಾವ್ಯ " ವಿಷಯವು, ಆತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ್ದ ಒಂದು ಆರಂಭಿಕ ಉಪನ್ಯಾಸವಾಗಿತ್ತು. ಮತ್ತು ಅದೇ ವರ್ಷ ಆತ ಅದನ್ನು ಪ್ರಕಟಿಸಿದ. ಬ್ರಾಡ್ಲೀಯ ಕೃತಿಗಳು: ೧) ಷೇಕ್ಸ್ ಪಿಯರಿಯನ್ ಟ್ರಾಜೆಡಿ ೨) ಆಕ್ಸ್ ಫರ್ಡ್ ಲೆಕ್ಚರರ್ಸ್ ೩) ಹೆಲೆನಿಕಾ ೪) ಕಾವ್ಯಕ್ಕಾಗಿ ಕಾವ್ಯ್ ೫) ಮೆಮೋರಿಯಂ ೬) ಟೆನಿಸನ್ ನ ಒ