ಪೋಸ್ಟ್‌ಗಳು

ಲಯ, ಯತಿ, ಪ್ರಾಸ: ಎಂ.ಎ.ಕನ್ನಡ

ಲಯ:           ಲಯ ಎಂಬ ಪದ ಸಂಸ್ಕೃತದ ’ಲಯ್’ ಎಂಬ ಧಾತುವಿನಿಂದ ನಿಷ್ಪನ್ನಗೊಂಡಿದೆ.                     ಲಯ- - - - > ನಡಿಗೆ, ಚಲನೆ, ಶೃತಿ       'ಲಯ’ ಎಂಬ ಪದಕ್ಕೆ ನುಡಿ, ಚಲನೆ, ಶೃತಿ ಎಂಬ ಅರ್ಥವಿದೆ. ಇಂಗ್ಲೀಷಿನ RYTHM ಎನ್ನುವುದು ಇದಕ್ಕೆ ಸಂವಾದಿಯಾದ ಪದ. ’ಲಯ’ ಎಂಬ ಪದಕ್ಕೆ ಪ್ರಳಯ, ನಾಶವಾಗು, ಕರಗು ಮುಂತಾದ ಅರ್ಥಗಳೂ ಇವೆ. ಆದುದರಿಂದ ’ಲಯ’ ಎನ್ನುವುದಕ್ಕೆ ನಡೆ/ ಗತಿ ಎಂಬುದನ್ನು ವಿಶಾಲಾರ್ಥದಲ್ಲಿ ಸ್ವೀಕರಿಸಲಾಗಿದೆ.     ’ಲಯ’ವನ್ನು ಪದ್ಯ-ಗದ್ಯ ಎರಡರಲ್ಲಿಯೂ ಪರಿಗಣಿಸಬಹುದು. ಸಂಗೀತದ ಭಾಷೆಯಲ್ಲಿ ’ಲಯ’ ಎನ್ನುವುದು ಒಂದು ಕಾಲಮಾನ. ಇಂಗ್ಲೀಷಿನಲ್ಲಿ RYTHM ಎನ್ನುವುದು ಪದ್ಯದ ಅನಿವಾರ್ಯ. ಪದ್ಯ-ಗದ್ಯ ಎರಡರಲ್ಲಿಯೂ ಲಯ ಇರುತ್ತದೆ. ಗದ್ಯದಲ್ಲಿ ಲಯ ಅನಿಯತವಾಗಿದ್ದರೆ, ಪದ್ಯದಲ್ಲಿ ನಿಯತವಾಗಿರುತ್ತದೆ. ಪದ್ಯದಲ್ಲಿ ಹಾಡುವ ಲಯವಿದ್ದರೆ, ಗದ್ಯದಲ್ಲಿ ಓದುವ ಲಯವಿರುತ್ತದೆ.                              ಲಯ                                /\                           ಪದ್ಯ   ಗದ್ಯ                            /       \             ಹಾಡುವ ಲಯ         ಓದುವ ಲಯ  ಮೂರು ಮಾತ್ರೆಯ ಲಯವನ್ನು ಸಾಮಾನ್ಯವಾಗಿ ಉತ್ಸಾಹ ರಗಳೆಯಲ್ಲಿ ಗುರುತಿಸಲಾಗುವುದು. ಉದಾ:           U   U U| -- U | -- U| U U U           ಮೊದಲ ತಾಯ ಹಾಲಕುಡಿದು        

ಧ್ವನಿ ಸಿದ್ಧಾಂತ: ಎಂ.ಎ.ಕನ್ನಡ

ಪೀಠಿಕೆ:           ಧ್ವನಿ ಎನ್ನುವುದು ಕಾವ್ಯದ ಅಂತರಂಗಕ್ಕೆ ವಿಶಿಷ್ಟವಾದ ಶಕ್ತಿಯನ್ನು ತಂದುಕೊಡುವ ಪ್ರಭೆಯಾಗಿದೆ. ಧ್ವನಿತತ್ತ್ವದ ಪ್ರತಿಪಾದನೆ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಇದನ್ನು ಆನಂದವರ್ಧನ ತನ್ನ "ಧ್ವನ್ಯಾಲೋಕ" ಎಂಬ ಕೃತಿಯ ಮೂಲಕ ಪ್ರತಿಪಾದಿಸಿದ್ದಾನೆ.       ಕಾವ್ಯದ ಶರೀರ ಬೇರೆ, ಆತ್ಮ ಬೇರೆ. ಶರೀರದಂತೆ ಆತ್ಮವು ಗೋಚರವಾಗುವುದಿಲ್ಲ. ಆದರೆ ಆತ್ಮವು ಶರೀರದಲ್ಲಿ ಪ್ರಕಾಶಗೊಂಡು ಸಾರ್ಥಕವಾಗುತ್ತದೆ. " ಧ್ವನಿ ಸಿದ್ಧಾಂತ "ವು ಕಾವ್ಯದಲ್ಲಿ ಯಾವುದು ಶರೀರ, ಅದರ ಮೂಲಕ ಆತ್ಮವು ಹೇಗೆ ಪ್ರಕಾಶಿತವಾಗುತ್ತದೆ ಎಂದು ತಿಳಿಸಿಕೊಡುತ್ತದೆ. ಧ್ವನಿ ಸಿದ್ಧಾಂತ:      "ಧ್ವನಿ" ಎಂಬುದು ಭಾಷೆಯನ್ನು ಅವಲಂಬಿಸಿ ಅನುಭವಕ್ಕೆ ಬರುವ ಒಂದು ಶಕ್ತಿ. ಅದನ್ನು ಆನಂದವರ್ಧನನು ಹೀಗೆ ಹೇಳಿದ್ದಾನೆ.         "ಮಹಾಕವಿಗಳ ವಾಣಿಯಲ್ಲಿ ವ್ಯಾಚ್ಯಾರ್ಥಕ್ಕಿಂತ ಬೇರೆಯಾಗಿ ಪ್ರತೀತಮಾನವಾಗುವ ಅರ್ಥವೊಂದು ಇದ್ದೇ ಇರುತ್ತದೆ. ಲಲನೆಯರಲ್ಲಿ ಸ್ಫುಟವಾದ ಅವಯವಗಳಿಗಿಂತ ಬೇರೆಯಾಗಿರುವ ಲಾವಣ್ಯದ ಹಾಗೆ ಅದು ಹೊಳೆಯುತ್ತದೆ" ಅಲ್ಲದೇ ಆನಂದವರ್ಧನನು "ಧ್ವನಿ&quo

"ಔಚಿತ್ಯ" : ಎಂ.ಎ.ಕನ್ನಡ

ಪೀಠಿಕೆ: ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕೊನೆಯದಾಗಿ ಗಮನಿಸಬೇಕಾದ ಮುಖ್ಯ ವಿಷಯ "ಔಚಿತ್ಯ" .  ನಮ್ಮ ಕಾವ್ಯ ಮೀಮಾಂಸೆಯ ಚರಿತ್ರೆಯಲ್ಲಿ "ಔಚಿತ್ಯ"ದ ವಿಷಯವನ್ನು ಕೊನೆಯದಾಗಿಯೇ ಏಕೆ ಅಧ್ಯಯನ ನಡೆಸಬೇಕು ಎನ್ನುವುದನ್ನು ಒಂದು ಹೋಲಿಕೆಯ ಮೂಲಕ ಮನವರಿಕೆ ಮಾಡಿಕೊಳ್ಳಬಹುದು.ಒಂದು ಮಗುವಿಗೆ ತಂದೆ-ತಾಯಿಯರು ಪ್ರಾಪಂಚಿಕ ಜ್ಞಾನ ನೀಡುವಾಗ ಹೀಗೆ ಮಾಡಬೇಡ, ಹಾಗೆ ಮಾಡು ಎಂದು ಉಚಿತಾನುಚಿತ ಸಲಹೆಗಳನ್ನು ಕೊಡುತ್ತಾರೆ. ಇದೇ ರೀತಿ ಯಾವುದೇ ವಿಷಯವನ್ನು ಕುರಿತು ಉಚಿತಾನುಚಿತಗಳನ್ನು ನಿರ್ಧರಿಸಲು ನಮಗೆ ಆ ವಿಷಯವನ್ನು ಕುರಿತು ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ.  ಹಾಗೆಯೇ ನಮ್ಮ ಭಾರತೀಯ ಕಾವ್ಯ ಮೀಮಾಂಸೆಯ ಶಾಸ್ತ್ರದಲ್ಲಿಯೂ ಔಚಿತ್ಯ ವನ್ನು ಕುರಿತು ನಾವು ಕೊನೆಯಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಕಾವ್ಯದ ಪ್ರಮುಖ ಅಂಗಗಳಾದ ಅಲಂಕಾರ, ಗುಣ, ರೀತಿ, ಧ್ವನಿ, ರಸ ಇವುಗಳನ್ನು ಹೇಗೆ ಉಚಿತವಾಗಿ ಬಳಸಿಕೊಳ್ಳಬೇಕು,ಕಾವ್ಯದ ಯಾವ ಸಂದರ್ಭದಲ್ಲಿ ಯಾವ ವಿಷಯಗಳಿಗೆ ಪ್ರಾಮುಖ್ಯತೆ ದೊರೆಯುತ್ತದೆ,ಯಾವುದು ಉಚಿತ ಯಾವುದು ಅನುಚಿತ ಎಂಬ ಪರಿಜ್ಞಾನ ನೀಡುವುದೇ "ಔಚಿತ್ಯ" ತತ್ವ .            ಈ ಔಚಿತ್ಯ ತತ್ವವನ್ನು ಕುರಿತು ಸಮಗ್ರವಾಗಿ ವಿವೇಚಿಸಿರುವ ಮೀಮಾಂಸಕರು ಎಂದರೆ ಆನಂದವರ್ಧನ ಮತ್ತು ಕ್ಷೇಮೇಂದ್ರ . ಭರತನ ನಾಟ್ಯ ಶಾಸ್ತ್ರದ ಮೂಲಕ ಸೂಚ್ಯವಾಗಿ ಹರಿದು ಬಂದ ಔಚಿತ್ಯವೆಂಬ ವಿಷಯವು ಆನಂದವರ್ಧನ ಮತ್ತು ಕ್ಷೇಮೇಂದ್ರರ

ಪೌರಾಣಿಕ-ಲೇಖನ : "ಕುಂತಿ" published in PRERANA on Nov 2013

‘ಕುತೂಹಲ’ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನು ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲೂ ಗುಟ್ಟಾದ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ “ಕುಂತಿ”ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳನ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ. ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತನೆಯೋ ಇಲ್ಲವೋ ಎಂಬ “ಕುತೂಹಲ”ವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸಿನ ಕುಂತಿಯು ಸ

ಅರಿಸ್ಟಾಟಲ್’ನ ಅನುಕರಣ ಸಿದ್ಧಾಂತ : ಎಂ.ಎ.ಕನ್ನಡ

ಅನುಕರಣಾವಾದ : 19ನೆಯ ಶತಮಾನದವರೆಗೆ ಯುರೋಪಿನ ಎಲ್ಲಾ ಭಾಷೆಗಳ ಸಾಹಿತ್ಯ ವಿಮರ್ಶೆಯಲ್ಲಿಯೂ ಅತ್ಯಂತ ಪ್ರಭಾವಶಾಲಿಯಾಗಿದ್ದ ಒಂದು ಮೌಖಿಕ ಪರಿಕಲ್ಪನೆ " ಅನುಕರಣಾವಾದ " ( THEORY OF IMITATION ). " ಪ್ಲೇಟೋ " ಮತ್ತು " ಅರಿಸ್ಟಾಟಲ್ " ಇಬ್ಬರೂ ಕಾವ್ಯದ ಸ್ವರೂಪವನ್ನು ಚರ್ಚಿಸುವ ಸಂದರ್ಭದಲ್ಲಿ "ಇಮಿಟೇಶನ್" ಶಬ್ದವನ್ನು ಬಳಸುತ್ತಾರೆ. ' ಇಮಿಟೇಶನ್ ’ ಎಂಬ ಶಬ್ದವು ಗ್ರೀಕ್ ಭಾಷೆಯ 'ಮಿಮೆಸಿಸ್’ ಶಬ್ದಕ್ಕೆ ಪರ್ಯಾಯವಾಗಿದೆ. ಪ್ಲೇಟೋ " ಅನುಕರಣ " ಶಬ್ದವನ್ನು ಅದರ ಸಂಕುಚಿತ ಅರ್ಥದಲ್ಲಿ "ಪ್ರತಿರೂಪ" ಅಥವಾ "ನಕಲು" ಎಂದು ಉಪಯೋಗಿಸುತ್ತಾನೆ. ಪ್ಲೇಟೋ ಹೇಳುತ್ತಾನೆ: ೧) ಕಲೆ ನಮ್ಮಲ್ಲಿನ ಹೀನ ವಾಸನೆಗಳಿಗೆ ಪುಷ್ಟಿ ನೀಡುತ್ತದೆ. ಕಾಮ ಕ್ರೋಧಗಳನ್ನು ಪೋಷಿಸುತ್ತವೆ. ೨) ಕಲಾವಿದರು ದೇವದೇವತೆಗಳನ್ನು ಮತ್ತು ಮಹಾ ಪುರುಷರನ್ನು  ಸಾಮಾನ್ಯರಂತೆ ಚಿತ್ರಿಸಿ ಅವರ ಮಹತ್ವಕ್ಕೆ ಚ್ಯುತಿ  ತರುತ್ತಾರೆ. ಈ ಕಾರಣಗಳಿಂದ ತಾತ್ವಿಕ ಮತ್ತು ನೈತಿಕ ನೆಲೆಗಳಲ್ಲಿ ಪ್ಲೇಟೋ ಕಲೆಯನ್ನು ನಿರಾಕರಿಸುತ್ತಾನೆ. ಆದರೆ ಪ್ಲೇಟೋವಿನ ವಿದ್ಯಾರ್ಥಿ " ಅರಿಸ್ಟಾಟಲ್ " ತನ್ನ ಗುರುವಿನ ಆರೋಪವನ್ನು ಅಲ್ಲಗೆಳೆದು,"ಕಲೆ"ಯ ಪಾತ್ರವನ್ನು ಸಮರ್ಥಿಸಲು "ಅನುಕರಣ"ದ ಪರಿಕಲ್ಪನೆಯನ್ನು ಉಪಯೋಗಿಸುತ್ತಾನೆ. ಆದರೆ ಅರಿಸ್ಟಾ

A C Bradley's ಕಾವ್ಯಕ್ಕಾಗಿ ಕಾವ್ಯ : ಎಂ.ಎ.ಕನ್ನಡ

ಕವಿ ಪರಿಚಯ: ಎ.ಸಿ. ಬ್ರ್ಯಾಡ್ಲೀ (1851) ಇಂಗ್ಲೀಷ್ ಸಾಹಿತ್ಯದ ವಿದ್ವಾಂಸ. ತಮ್ಮ ತಂದೆಯ ಇಪ್ಪತ್ತೊಂದು ಮಕ್ಕಳಲ್ಲಿ ಕೊನೆಯವರು.ಓದಿನ ನಂತರ "ಲಿವರ್ ಪೂಲ್" ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರು. ನಂತರ ಲಿವರ್ ಪೂಲ್, ಗ್ಲಾಸ್ಗೋ, ಎಡಿನ್ ಬರ್ಗ್, ಡರ್ಹಾಮ್ ವಿಶ್ವವಿದ್ಯಾನಿಲಯಗಳು ನೀಡಲು ಬಂದ ಗೌರವ ಡಾಕ್ಟರೇಟ್ ಅನ್ನು ನಿರಾಕರಿಸಿದರು. ಬ್ರಾಡ್ಲೀ ಮದುವೆ ಮಾಡಿಕೊಂಡಿಲ್ಲ, ಅವಿವಾಹಿತರು. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ರಿಸರ್ಚ್ ಫೆಲೋಶಿಪ್ ಸ್ಥಾಪಿಸಿದ್ದಾರೆ. ಬ್ರಾಡ್ಲೀ ಅವರು ಬರೆದಿರುವ " ಷೇಕ್ಸ್ ಪಿಯರಿಯನ್ ಟ್ರಾಜೆಡಿ " ಕೃತಿಯು ಎಲ್ಲರಿಂದಲೂ ಅತ್ಯಂತ ಕಟು ಟೀಕೆಗೆ ಒಳಗಾಗಿದ್ದರೂ, ಇಂದಿಗೂ ಸಹ ಅತ್ಯುತ್ತಮ ಮತ್ತು ಪ್ರಭಾವಿ ಕೃತಿಯಾಗಿದೆ. ಈ ಕೃತಿಯು ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣ ಕಂಡಿದೆ.  ಬ್ರಾಡ್ಲೀಯ ಸಿದ್ಧಾಂತವಾದ " ಕಾವ್ಯಕ್ಕಾಗಿ ಕಾವ್ಯ " ವಿಷಯವು, ಆತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ್ದ ಒಂದು ಆರಂಭಿಕ ಉಪನ್ಯಾಸವಾಗಿತ್ತು. ಮತ್ತು ಅದೇ ವರ್ಷ ಆತ ಅದನ್ನು ಪ್ರಕಟಿಸಿದ. ಬ್ರಾಡ್ಲೀಯ ಕೃತಿಗಳು:       ೧) ಷೇಕ್ಸ್ ಪಿಯರಿಯನ್ ಟ್ರಾಜೆಡಿ       ೨) ಆಕ್ಸ್ ಫರ್ಡ್ ಲೆಕ್ಚರರ್ಸ್       ೩) ಹೆಲೆನಿಕಾ       ೪) ಕಾವ್ಯಕ್ಕಾಗಿ ಕಾವ್ಯ್       ೫) ಮೆಮೋರಿಯಂ       ೬) ಟೆನಿಸನ್ ನ ಒ

ಕವಿ ಮತ್ತು ಕಾವ್ಯದ ಮೇಲೆ William Wordsworth ನ ವಿಚಾರಧಾರೆ ಎಂ.ಎ.ಕನ್ನಡ

Wordsworth (1770) ಇಂಗ್ಲೀಷ್ ಭಾಷೆಯ ಒಬ್ಬ ಶ್ರೇಷ್ಠ ಕವಿ. ಕನ್ನಡ ನವೋದಯದ ಕವಿಗಳ ಮೆಚ್ಚುಗೆ ಪಡೆದವನು. Wordsworth ನಿಗೆ ಚಿಕ್ಕ ವಯಸ್ಸಿನಿಂದಲೂ ನಿಸರ್ಗದಲ್ಲಿ ಅಪಾರವಾದ ಪ್ರೇಮ. ಒಂದು ರೀತಿಯಾದ ಅಸಾಧಾರಣ ಆಕರ್ಷಣೆ. ಫ್ರಾನ್ಸಿನ ಮಹಾಕ್ರಾಂತಿಯ ತತ್ವಗಳಿಂದ ಆಕರ್ಷಿತನಾಗಿದ್ದವನು, ಈ ಕ್ರಾಂತಿಯಿಂದ ಉಂಟಾದ ಕ್ರೌರ್ಯ, ರಕ್ತಪಾತಗಳನ್ನು ಕಂಡು ರೋಸಿದವನು. 1839 ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ ಈತನಿಗೆ ಗೌರವ ಡಾಕ್ಟರೇಟ್ ನೀಡಿದೆ.  Wordsworth ಕಾವ್ಯ ಜೀವನದಲ್ಲಿ ಗಾಢ ಪ್ರಭಾವವನ್ನು ಬೀರಿದವರಲ್ಲಿ ಇಬ್ಬರು ಪ್ರಮುಖರು. ಅವರೆಂದರೆ ಒಬ್ಬಳು ಅವನ ತಂಗಿ ಡೊರೋಥಿ, ಮತ್ತೊಬ್ಬ ಶ್ರೇಷ್ಠ ಕವಿ-ವಿಮರ್ಶಕ ಎಸ್.ಟಿ.ಕೊಲರಿಜ್. 1798ರಲ್ಲಿ “ ಲಿರಿಕಲ್ ಬ್ಯಾಲೆಡ್ಸ್ ” ಎಂಬ Wordsworthನ ಕವನ ಸಂಕಲನ ಹೊರಬಂತು. ಈ ಕವನ ಸಂಕಲನವು “ರೊಮ್ಯಾಂಟಿಕ್ ಕಾವ್ಯ” ದ ಉದಯವನ್ನು ಸ್ಪಷ್ಟವಾಗಿ ಸಾರಿತು. ಇದರಲ್ಲಿ Wordsworth ಮತ್ತು ಕೊಲರಿಜ್ ಇಬ್ಬರ ಕವನಗಳೂ ಇವೆ.  Wordsworth ಅತಿ ಸಾಮಾನ್ಯ ಎನ್ನಿಸುವಂತಹ ವಿಷಯದ ಮೇಲೆಯೂ ಕವನ ಬರೆದಿದ್ದಾನೆ. ಈ ಮೂಲಕ ರೊಮ್ಯಾಂಟಿಕ್ ಚಳುವಳಿಯ ನಾಯಕನಾಗಿದ್ದಾನೆ. ಕಾವ್ಯಭಾಷೆಯ ಕೃತಕತೆ ನಿವಾರಿಸಿ ಕಾವ್ಯ ಭಾಷೆಯನ್ನು ಸಹಜಗೊಳಿಸಿದ್ದಾನೆ.  Wordsworth ಕವನಗಳು: ಪ್ರಿಲ್ಯೂಡ್ ದಿ ಡಫೋಡಿಲ್ಸ್ ಮೈಕೆಲ್ ರೆಸಲ್ಯೂಷನ್ ಅಂಡ್ ಇಂಡಿಪೆಂಡೆನ್ಸ್ Wordsworth ಪ್ರಕಾರ ಕವಿ-ಕಾವ್ಯದ ಉದ್ದೇಶ: ಕವ