ಧ್ವನಿ ಸಿದ್ಧಾಂತ: ಎಂ.ಎ.ಕನ್ನಡ
ಪೀಠಿಕೆ: ಧ್ವನಿ ಎನ್ನುವುದು ಕಾವ್ಯದ ಅಂತರಂಗಕ್ಕೆ ವಿಶಿಷ್ಟವಾದ ಶಕ್ತಿಯನ್ನು ತಂದುಕೊಡುವ ಪ್ರಭೆಯಾಗಿದೆ. ಧ್ವನಿತತ್ತ್ವದ ಪ್ರತಿಪಾದನೆ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಇದನ್ನು ಆನಂದವರ್ಧನ ತನ್ನ "ಧ್ವನ್ಯಾಲೋಕ" ಎಂಬ ಕೃತಿಯ ಮೂಲಕ ಪ್ರತಿಪಾದಿಸಿದ್ದಾನೆ. ಕಾವ್ಯದ ಶರೀರ ಬೇರೆ, ಆತ್ಮ ಬೇರೆ. ಶರೀರದಂತೆ ಆತ್ಮವು ಗೋಚರವಾಗುವುದಿಲ್ಲ. ಆದರೆ ಆತ್ಮವು ಶರೀರದಲ್ಲಿ ಪ್ರಕಾಶಗೊಂಡು ಸಾರ್ಥಕವಾಗುತ್ತದೆ. " ಧ್ವನಿ ಸಿದ್ಧಾಂತ "ವು ಕಾವ್ಯದಲ್ಲಿ ಯಾವುದು ಶರೀರ, ಅದರ ಮೂಲಕ ಆತ್ಮವು ಹೇಗೆ ಪ್ರಕಾಶಿತವಾಗುತ್ತದೆ ಎಂದು ತಿಳಿಸಿಕೊಡುತ್ತದೆ. ಧ್ವನಿ ಸಿದ್ಧಾಂತ: "ಧ್ವನಿ" ಎಂಬುದು ಭಾಷೆಯನ್ನು ಅವಲಂಬಿಸಿ ಅನುಭವಕ್ಕೆ ಬರುವ ಒಂದು ಶಕ್ತಿ. ಅದನ್ನು ಆನಂದವರ್ಧನನು ಹೀಗೆ ಹೇಳಿದ್ದಾನೆ. "ಮಹಾಕವಿಗಳ ವಾಣಿಯಲ್ಲಿ ವ್ಯಾಚ್ಯಾರ್ಥಕ್ಕಿಂತ ಬೇರೆಯಾಗಿ ಪ್ರತೀತಮಾನವಾಗುವ ಅರ್ಥವೊಂದು ಇದ್ದೇ ಇರುತ್ತದೆ. ಲಲನೆಯರಲ್ಲಿ ಸ್ಫುಟವಾದ ಅವಯವಗಳಿಗಿಂತ ಬೇರೆಯಾಗಿರುವ ಲಾವಣ್ಯದ ಹಾಗೆ ಅದು ಹೊಳೆಯುತ್ತದೆ" ಅಲ್ಲದೇ ಆನಂದವರ್ಧನನು "ಧ್ವನಿ&quo