ಪೋಸ್ಟ್‌ಗಳು

ಕವನ : "ಮುಟ್ಟು"

ಯಾರು ಹೇಳಿದರು ಹನಿರಕ್ತವೂ ಅಮೂಲ್ಯವೆಂದು ಸೋರಿ ಹೋಗುತ್ತಿದೆ ಇಲ್ಲಿ ನಮ್ಮ ನರಳಾಟದಲ್ಲಿ ಒಂದೊಂದು ಹನಿಯೂ ಹೊರಬರುವಾಗ ಕಾಡಿಸಿ ನರಳಿಸಿ ಪೀಡಿಸಿ ಬರುತ್ತಿದೆ ಯಾರ ಕಣ್ಣಿಗೂ ಕಾಣದೇ ಯಾರಿಗೂ ಗೊತ್ತಾಗದೇ.... ನಮ್ಮ ನೋವು ನಮಗಷ್ಟೇ ಗೊತ್ತು ಒಡಲಿನ ಸಂಕಟ ನುಲಿದಾಟದ ಗಮ್ಮತ್ತು ಹೊರಗೆ ತೋರಿಸುವಂತಿಲ್ಲ ಒಳಗೆ ಅನುಭವಿಸುವಂತಿಲ್ಲ.. ಎಷ್ಟೇ ಅಸಹನೆಯಾಗುತ್ತಿದ್ದರೂ ಕಣ್ಣು ಕತ್ತಲಿಡುತ್ತಿದ್ದರೂ ನಗುನಗುತ್ತಲೇ ಅಡ್ಡಾಡಬೇಕು ಹೊಟ್ಟೆ ಬಟ್ಟೆಯಂತೆ ನುಲಿದು ಹಿಂಸೆಯಾಗುತ್ತಿದ್ದರೂ ಬೆನ್ನು ಬಾಗಿಸದೇ ಓಡಾಡಬೇಕು ಏಕೆಂದರೆ ಮೂರು ದಿನಗಳ ರಜೆಯಿಲ್ಲ ನಮಗೀಗ ಗಂಡಸರಿಗೆ ಸಮಾನರು ನಾವು ಅವರು ಹಾಕಿದ್ದ ಬೇಲಿಯನ್ನು ಕಿತ್ತು ಹೊರಗಡಿ ಇಟ್ಟಿರುವೆವು.. ಆದರೆ ಕಿತ್ತ ಬೇಲಿಯನ್ನು ಮತ್ತೆ ಕೊರಳಿಗೇ ಸುತ್ತುಕೊಂಡಿರುವೆವು.. ಈಗ ಬೇಲಿ ಕೀಳಲೂ ಆಗದೇ ಹಿಂದಡಿ ಇಡಲೂ ಆಗದೇ ಒದ್ದಾಡುತ್ತಿರುವೆವು.. ***** Published in Sakhi magazine 30.06.2012 ಕೆ.ಎ.ಸೌಮ್ಯ ಮೈಸೂರು

Sad Fishing @ VK on 26.01.2020

ಇಮೇಜ್
ಯಾವುದೇ ವಿಷಯವಿರಲಿ ನಮ್ಮ ಯುವ ಜನತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೇನೇ ಸಮಾಧಾನ. ಖುಷಿಯೇ ಇರಲಿ ಅಥವಾ ದುಃಖವೇ ಇರಲಿ ಎಲ್ಲರಿಗೂ‌ ಆ ವಿಷಯ ತಿಳಿಸಬೇಕು ಎನ್ನುವ ಹಪಾಹಪಿ. ಹಾಗಾಗಿ ಜನರು ಹಿಂದೆ ಮುಂದೆ ಯೋಚಿಸದೇ ತಮಗೆ ಅನ್ನಿಸಿದ್ದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿಬಿಡುತ್ತಾರೆ. ಮತ್ತು ಓದುಗರ ಅನುಕಂಪ ಬಯಸುತ್ತಾರೆ. ಆದರೆ ನೋವಿನ ಭರದಲ್ಲಿ ತಮ್ಮೆಲ್ಲಾ ಗುಟ್ಟುಗಳನ್ನೂ ತಾವಾಗಿಯೇ ಜಗಜ್ಜಾಹೀರು ಮಾಡುವುದರಿಂದ ಮುಂದೆ ತಾವು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಆಲೋಚನೆ ಆ ಸಂದರ್ಭದಲ್ಲಿ ಅವರಿಗೆ ಬರುವುದಿಲ್ಲ. "ಸ್ಯಾಡ್ ಫಿಶಿಂಗ್" ಎನ್ನುವುದು ಒಂದು ಹೊಸ ಟ್ರೆಂಡ್ ಆಗಿದ್ದು, ಯುವ ಜನತೆ ತಮ್ಮೆಲ್ಲಾ ನೋವುಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟು ಮತ್ತೊಬ್ಬರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜಾಲತಾಣದ ಸಹೃದಯ ಓದುಗರು ಇದನ್ನು ಓದಿ ತನ್ನ ಬಗ್ಗೆ ಅನುಕಂಪದಿಂದ ಎರಡು ಮಾತುಗಳನ್ನಾಡಲಿ ಎನ್ನುವುದು ಅವರ ಆಶಯ.‌ ಅಲ್ಲದೇ ಯುವಜನರು ತಮ್ಮ ಭಾವನಾತ್ಮಕ ಸಮಸ್ಯೆಗಳಿಂದ ಹೊರಬರಲು ಪರಿಹಾರಕ್ಕಾಗಿಯೂ ಜಾಲತಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಬದಲು ಜನರ ಚುಚ್ಚುಮಾತುಗಳಿಂದ ಪರಿಹಾರ ಬಯಸಿದವರು ಭ್ರಮನಿರಸರಾಗುತ್ತಿದ್ದಾರೆ. ಜೊತೆಗೆ ಅದೇ ಸಂದರ್ಭದಲ್ಲಿ ತಮ್ಮ ಬಗ್ಗೆ ಅರಿತವರಿಂದ ದೌರ್ಜನ್ಯಕ್ಕೂ ಒಳಗಾಗುತ್ತಿದ್ದಾರೆ. ಹೇಗೆ ಗೊತ್ತೇ? ನೀವೇ ಬಾಯಿ ಬಿಡದಿದ್ದರೆ

Hunter's moon : "ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯರು" (ಮಾನಸಾ)

ಇಮೇಜ್
ನಾನು ಚಿಕ್ಕವಳಿದ್ದಾಗ ಶಾಲಾ ರಜದ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದುಬಿಟ್ಟರೆ "ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಬಿಡು" ಅಂತ ಮನೆಯವರೆಲ್ಲಾ ಆಡಿಕೊಳ್ಳುತ್ತಿದ್ದರು. ಅಂದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದು ಸಾಧ್ಯವೇ ಇಲ್ಲ ಎನ್ನುವುದು ನಮ್ಮ ಅನಿಸಿಕೆ. ನಮಗೆ ಪ್ರಕೃತಿಯಲ್ಲಿ ಏನೋ ಒಂದು ನಿರೀಕ್ಷೆ ಇದೆ. ನಮ್ಮ ನಿರೀಕ್ಷೆಯಂತೆಯೇ ನಡೆದರೆ ಸರಿ. ಇಲ್ಲದಿದ್ದರೆ ಏನೇನೋ ಭಯಾನಕ ಕಲ್ಪನೆಗಳನ್ನು ಮಾಡಿಕೊಂಡು ಹೈರಾಣಾಗುತ್ತೇವೆ. ಪ್ರಕೃತಿಗೆ ಸಂಬಂಧಪಟ್ಟ ಎಲ್ಲಾ ಕಲ್ಪನೆಗಳೂ ಪ್ರಳಯದೊಂದಿಗೇ ಕೊನೆಯಾಗುವುದೊಂದು ವಿಶೇಷ. ಇನ್ನು ಪಶ್ಚಿಮದಲ್ಲಿ ಸೂರ್ಯ ಹುಟ್ಟುವುದನ್ನೇ ನಿರೀಕ್ಷಿಸಿರದ ನಾವು, ಆಕಾಶದಲ್ಲಿ ಇಬ್ಬರು ಸೂರ್ಯನನ್ನು ನೋಡಿದರೆ ಎಷ್ಟು ಹೆದರಿರಬಹುದು ಅಲ್ಲವೇ? ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯ: ಅದು ಅಕ್ಟೋಬರ್ 2017ರ ಬೆಳಗ್ಗಿನ ಝಾವದ ಸಮಯ. ಅಮೆರಿಕಾದ ನ್ಯೂಯಾರ್ಕ್ ಸಿಟಿಯ ಜನರು ನೋಡುತ್ತಿದ್ದಂತೆಯೇ ಆಗಸದಲ್ಲಿ ಒಂದೇ ಸಮಯದಲ್ಲಿ ಎರಡು ಸೂರ್ಯ ಕಾಣಿಸಿಕೊಂಡಿತು. ನಾಸ್ಟ್ರಾಡಾಮಸ್ ಭವಿಷ್ಯವಾಣಿ ಮತ್ತು ಬಹು ಪುರಾತನವಾದ ಮಾಯನ್ ಸಂಸ್ಕೃತಿಗಳಲ್ಲಿ ಆಗಸದಲ್ಲಿ ಒಮ್ಮೆಲೇ ಇಬ್ಬರು ಸೂರ್ಯ ಅವತರಿಸುವ ಬಗ್ಗೆ ಪುರಾಣದ ಕಥೆಗಳಿವೆ. ಅದನ್ನೆಲ್ಲಾ ಓದಿರುವ ಜನರು ಈಗ ಈ ಇಬ್ಬರು ಸೂರ್ಯರನ್ನು ಒಟ್ಟಿಗೆ ನೋಡಿ ದಿಗಿಲಿಗೆ ಬಿದ್ದರು. ಪುರಾಣದ ಪ್ರಕಾರ ಒಬ್ಬ ಸೂರ್ಯ ನಾಶ ಮಾಡುವುದಕ್ಕೆ ಬಂದರೆ, ಮತ್ತೊಬ್ಬ ಸೂರ್ಯ ನಾಶದಿ

ಭೂಮಿಯಂತಹಾ ಮತ್ತೊಂದು ಗ್ರಹ (ಮಾನಸಾ) ಆಗಸ್ಟ್ 2019

ಇಮೇಜ್
ಭೂಮಿ ನಮ್ಮ ಗ್ರಹ. ತಿಳಿದೋ ತಿಳಿಯದೆಯೋ ನಾವಿಲ್ಲಿ ಹುಟ್ಟಿಬಿಟ್ಟಿದ್ದೇವೆ. ಅನಂತ ಆಕಾಶದಲ್ಲಿ ದೂರದೂರದವರೆಗೂ ನಾವು ದೃಷ್ಟಿ ಹಾಯಿಸಿದರೂ ನಮ್ಮ ಕಣ್ಣಿಗೆ ಕಾಣಸಿಗುವುದು ನಕ್ಷತ್ರಗಳು ಮಾತ್ರ. ನಮ್ಮ ಸೌರವ್ಯೂಹದ ಇತರೆ ಗ್ರಹಗಳಲ್ಲಿ ಮನುಷ್ಯ ಬದುಕುವಂತಹ ವಾತಾವರಣ ಇಲ್ಲ ಅಂತ ನಮಗೆ ಈಗಾಗಲೇ ಗೊತ್ತಾಗಿದೆ. ಹಾಗಾಗಿ ಭೂಮಿ ಒಂದರಲ್ಲಿಯೇ ಜೀವಿಗಳು ಇರುವುದು, ಜೀವ ಇರುವುದು ಅಂತ ನಮ್ಮ ನಂಬಿಕೆ. ಭೂಮಿಯಂತಹ ಗ್ರಹ ಮತ್ತೊಂದಿಲ್ಲ ಅಂತ ಗಾಢವಾಗಿ ನಂಬಿದ್ದೇವೆ ನಾವುಗಳು. ಆದರೆ ನಮ್ಮ ಈ ನಂಬಿಕೆಯನ್ನು ಸುಳ್ಳು ಮಾಡುವಂತಹ ಸುದ್ದಿಯೊಂದು ಇದೀಗ ಬಂದಿದೆ. ಭೂಮಿಯಂತಹ ಮತ್ತೆರೆಡು ಗ್ರಹ: ನಮ್ಮ ಸೌರವ್ಯೂಹದಿಂದ ಕೆಲವೇ ಜ್ಯೋತಿ ವರ್ಷಗಳಷ್ಟು ದೂರದಲ್ಲಿರುವ ಒಂದು ನಕ್ಷತ್ರವನ್ನು ಸುತ್ತು ಹಾಕುತ್ತಿರುವ ಎರಡು ಗ್ರಹಗಳು ಥೇಟ್ ಭೂಮಿಯಂತೆಯೇ ಇವೆಯಂತೆ. ಅದೂ ಸಹ ನಮ್ಮ ಗೆಲಾಕ್ಸಿಯ ಪರಿಮಿತಿಯಲ್ಲಿಯೇ... ಆಶ್ಚರ್ಯ ಆಯ್ತಲ್ವಾ? ಆದರೆ ಈ ಗ್ರಹಗಳು ಭೂಮಿಗಿಂತಲೂ ದೊಡ್ಡದಾಗಿವೆಯಂತೆ. ಅಷ್ಟೇ ಅಲ್ಲ... ಈ ಗ್ರಹಗಳಲ್ಲಿಯೂ ಮನುಷ್ಯ ಬದುಕುವ ವಾತಾವರಣ ಇದೆಯಂತೆ. ಅಲ್ಲಿ ನೀರಿರುವ ಸುಳಿವು ಮತ್ತು ಆ ನೀರು ದ್ರವರೂಪದಲ್ಲಿಯೇ ಇರುವ ಕುರುಹು ಸಿಕ್ಕಿದೆಯಂತೆ. ಅವುಗಳೂ ಸಹ ತನ್ನ ಸೂರ್ಯನನ್ನು ನಿಗದಿತ ಅವಧಿಯಲ್ಲಿ ಸುತ್ತು ಹಾಕುತ್ತಿದೆಯಂತೆ. ಹಾಗಾಗಿ ಋತುಗಳೂ ಸಹ ಇರಬಹುದು. ಮನುಷ್ಯನಿಗೆ ಬೇಕಾದ ಎಲ್ಲವೂ ಅಲ್ಲಿದೆ. ಅಕಸ್ಮಾತ್ ನಮ್ಮ ಭೂಮಿಗೆ ಏನಾದರೂ ಗಂಡಾಂತರ ಒದಗ

Met Gala published in Manasa (July 2019)

ಇಮೇಜ್
ನಾವು ನಮ್ಮದೇ ಪ್ರಪಂಚ ಎಂದುಕೊಂಡಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಭೂಮಿಯ ಮೇಲೆ ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಎಷ್ಟೋ ವಿಷಯಗಳು ನಮ್ಮನ್ನು ತಲುಪದೇ ಹೋಗುತ್ತವೆ. ಕೆಲವು ವಿಷಯಗಳು ತಡವಾಗಿ ತಲುಪುತ್ತವೆ. ಆಗ ಇಷ್ಟು ದಿನ ಇದು ಗೊತ್ತೇ ಇರಲಿಲ್ವಲ್ಲ ಅಂತ ಕಣ್ಣು ಕಣ್ಣು ಬಿಡುವಂತಾಗುತ್ತದೆ. ಈ ಗೊತ್ತಿಲ್ಲದ ಸಂಗತಿಗೆ ಹೊಸ ಸೇರ್ಪಡೆ ಎಂದರೆ ಕಳೆದ ಮೇ ತಿಂಗಳಿನಲ್ಲಿ ಅಮೆರಿಕಾದಲ್ಲಿ ನಡೆದ "ಮೆಟ್ಗಾಲ" ಎಂಬ ಫ್ಯಾಷನ್ ಕಾರ್ಯಕ್ರಮ. ಪ್ರತೀ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ಈ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಫ್ಯಾಷನ್ ಪ್ರಿಯರು ಆಗಮಿಸುತ್ತಾರೆ. ಫ್ಯಾಷನ್ ಕಾರ್ಯಕ್ರಮ ಎಂದ ಮೇಲೆ ಎಲ್ಲರೂ ಸುಂದರವಾಗಿ ಡ್ರೆಸ್ ಮಾಡಿಕೊಂಡು ಬಂದು ಮಿಂಚುತ್ತಾರೆ, ಕಣ್ತುಂಬ ನೋಡಿ ಸಂತೋಷಿಸಬಹುದು ಎಂದುಕೊಂಡರೆ ಅದು ಕೇವಲ ಭ್ರಮೆಯಷ್ಟೇ. ಏಕೆಂದರೆ ಇಲ್ಲಿಗೆ ಬರುವವರ ವೇಷಭೂಷಣ ಬಹಳ ವಿಚಿತ್ರವಾಗಿರುತ್ತದೆ. ಈ ಬಾರಿಯ ಮೆಟ್ಗಾಲದಲ್ಲಿನ ಪ್ರಿಯಾಂಕಾ ಛೋಪ್ರಾಳ ಒಂದು ಫೋಟೋ ಭಾರಿ ಸದ್ದು ಮಾಡಿತು. ವಿಚಿತ್ರ ಕೇಶ ವಿನ್ಯಾಸ ಮತ್ತು ಉಡುಪಿನಿಂದ ಅವಳ್ಯಾರು ಎಂದೇ ಅರ್ಥವಾಗದೇ ಪರದಾಡುವಂತಾಯ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಸಹ ಹಾಜರಿದ್ದರೂ ಅವಳ ಉಡುಪು ಸರ್ವೇ ಸಾಧಾರಣದಂತೆ ಸಾಮಾನ್ಯವಾಗಿದ್ದರಿಂದ ಅವಳು ಭಾಗವಹಿಸಿದ್ದೇ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಿ ನೋಡಿದರೂ ಬರೀ ಪ್ರಿಯಾಂಕಾಳದ್ದೇ ಸದ್ದು-ಸು

ಬ್ರೇಕಪ್ ನೋವು ಎನಿಸಲೇ ಇಲ್ಲ (VK 2.6.19)

ಇಮೇಜ್
ಬ್ರೇಕಪ್ ಆಗಿದೆ.....!!! ಹೌದು. ವಿಧಿಯಿಲ್ಲ ಒಪ್ಪಿಕೊಳ್ಳಲೇಬೇಕು. ಅವನನ್ನು ಮರೆತು ಹೊಸ ಜೀವನ ಶುರು ಮಾಡಲೇ ಬೇಕು. ಘಳಿಗೆ ಘಳಿಗೆಗೂ ನೆನಪಾಗುತ್ತಿದ್ದ ಅವನ ನೆನಪು ಈಗಿಲ್ಲ. ಆದರೆ ನನ್ನ ಪ್ರೀತಿ ನೆನೆದು ಬಹಳ ನೋವಾಗುತ್ತಿದೆ. ಪ್ರತೀ ಬಾರಿಯೂ ನಮ್ಮಿಬ್ಬರ ನಡುವೆ ಜಗಳವಾದಾಗ ನಾನೇ ಮುಂದಾಗಿ ಅವನನ್ನು ಮಾತನಾಡಿಸಿಬಿಡುತ್ತಿದ್ದೆ. ಆದರೆ ಈ ಬಾರಿ ಯಾಕೋ ಹಾಗೆ ಮಾಡಬೇಕು ಅಂತ ಅನ್ನಿಸುತ್ತಿಲ್ಲ. ಇವನೊಂದಿಗೆ ಇದ್ದು ಕಣ್ಣೀರು ಹಾಕುವುದಕ್ಕಿಂತ ದೂರಾಗುವುದೇ ಒಳ್ಳೆಯದು ಎನಿಸುತ್ತಿದೆ. ಆದರೆ ಹಾಗೆ ನಿರ್ಧಾರ ಮಾಡುವುದು ಸುಲಭ. ಅದರಂತೆ ನಡೆದುಕೊಳ್ಳುವುದು ಕಷ್ಟ. ಈ ಮನಸ್ಸೋ... ಕ್ಷಣಕ್ಕೊಂದು ಬಾರಿ ಬಣ್ಣ ಬದಲಾಯಿಸುತ್ತದೆ. ಒಮ್ಮೆ ಅವನು ಮಾಡಿದ್ದು ಸರಿ ಎಂದರೆ, ಮತ್ತೊಮ್ಮೆ ನಾನು ಮಾಡಿದ್ದೇ ಸರಿ ಎನ್ನುತ್ತದೆ. ಯಾರು ಸರಿಯೋ ಯಾರು ತಪ್ಪೋ? ನನ್ನ ಮನಸ್ಸಿಗೆ ನೋವಾದದ್ದಂತೂ ನಿಜ ತಾನೇ? ಅಂತ ಹೇಳಿಕೊಂಡು ಅದರ ಬಾಯಿ ಮುಚ್ಚಿಸುತ್ತೇನೆ. ಈಗ ಅವನ ಅನುಪಸ್ಥಿತಿಯಲ್ಲಿ ಮನಸ್ಸು ಹಿಂದೆ ನಡೆದದ್ದನ್ನೇ ನೆನೆಸುತ್ತಾ ಕೊರಗದಂತೆ ಮಾಡಲು ದಾರಿ ಹುಡುಕಬೇಕಿದೆ. ಒಮ್ಮೊಮ್ಮೆ ಈ ಮನಸ್ಸು ಸಹ ಯಾವುದೇ ವಿಲನ್ನಿಗೂ ಕಡಿಮೆ ಇಲ್ಲದ ಹಾಗೆ ಐಡಿಯಾ ಕೊಡುತ್ತದೆ. 'ಅವನಿಲ್ಲದಿದ್ರೆ ಏನಂತೆ, ಅವನಂತಹಾ ನೂರಾರು ಹುಡುಗರು ಸಿಗ್ತಾರಪ್ಪ' ಅಂತ ನಮ್ಮನ್ನೇ ಹಳ್ಳಕ್ಕೆ ಬೀಳಿಸಲು ನೋಡುತ್ತದೆ. ಆದರೆ ಯಾರನ್ನೋ ಮರೆಯಲು ನಾವು ಮತ್ಯಾರನ್ನೋ ಇಷ್ಟ ಪಡು

ಮದುವೆಯಾದ ನಂತರ ಬದಲಾಗುವ ಹೆಂಡತಿ VK

ಇಮೇಜ್
ಮದುವೆಯಾದ ಮೇಲೆ ಮುಗಿಯಿತು, ಇನ್ನು ಗಂಡ ತನ್ನವನೇ ಎಂಬ ತುಂಟ ನಿರ್ಲಕ್ಷ್ಯ ಹೆಂಡತಿಯದ್ದು. ತಾನು ಈಗ ಹೇಗೇ ಇದ್ದರೂ ಗಂಡನಾದವನು ತನ್ನನ್ನು ಇದ್ದ ಹಾಗೆಯೇ ಒಪ್ಪಬೇಕು ಎಂಬುದು ಅವಳ ವಾದ. ಮದುವೆಗೆ ಮುಂಚೆ ಮಾಡುತ್ತಿದ್ದ ಡಯಟ್ ಈಗ ಮಾಡಬೇಕು ಅಂತ ಅನ್ನಿಸುವುದಿಲ್ಲ ಅವಳಿಗೆ. ತನ್ನ ಡ್ರೆಸ್ ಬಗ್ಗೆ ವಹಿಸುತ್ತಿದ್ದ ಅತಿಯಾದ ಕಾಳಜಿ ಈಗಿಲ್ಲ. ಎಲ್ಲಿಗೆ ಹೋಗಬೇಕೆಂದರೂ ಯಾವುದೋ ಒಂದು ಡ್ರೆಸ್ ತೆಗೆದು ಮೈಗೆ ಸುತ್ತಿಕೊಂಡು ಹೊರಡುತ್ತಿದ್ದಾಳೆ ಆಕೆ. ತಾನು ಹೇಗೆ ಕಾಣುತ್ತಿರಬಹುದು ಎಂಬ ಕುತೂಹಲವೇ ಆಕೆಗೆ ಇಲ್ಲ. ಹೇಗಿದ್ದರೇನು? ಮದುವೆ ಆಗಿ ಆಯ್ತಲ್ಲ ಎಂಬುದೇ ಅವರ ತುಂಟ ಉತ್ತರ. ಮದುವೆ ಆಗುವವರೆಗೂ ಅತಿಯಾಗಿ ಕಾಳಜಿ ವಹಿಸಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳುವ ಮಹಿಳೆಯರು ಮದುವೆಯ ನಂತರ ಡ್ರೆಸ್ ಸೆನ್ಸ್ ಅನ್ನು ಮರೆತುಬಿಡುತ್ತಾರೆ. ಮದುವೆಯಾದ ನಂತರ ಪ್ರತೀ ಮಹಿಳೆ ಈ ರೀತಿಯ ಮನೋಭಾವಕ್ಕೆ ಒಳಗಾಗುತ್ತಾಳೆ. ಚಿಕ್ಕಂದಿನಿಂದಲೂ ಆಕೆಗೆ ಮದುವೆಯೇ ಆಕೆಯ ಜೀವನದ ಪರಮೋದ್ದೇಶ ಎಂದು ಹೇಳಿಕೊಟ್ಟಿರುವುದರಿಂದಲೋ ಏನೋ? ಮದುವೆಯ ನಂತರ ತಾನು ಚಂದ ಕಂಡು ಸಾಧಿಸುವುದೇನಿದೆ ಎಂಬ ಅಭಿಪ್ರಾಯ ಬಹುತೇಕರದ್ದು. ಮಕ್ಕಳಾದ ಮೇಲೆ ಅಂತೂ ಯಾರಿಗಾಗಿ ತಾನು ಅಲಂಕಾರ ಮಾಡಿಕೊಳ್ಳಬೇಕು ಎಂಬ ಹತಾಶೆ ಎದುರಾಗುತ್ತದೆ. ಜೀವನದಲ್ಲಿ ಜವಾಬ್ದಾರಿ ಹೆಚ್ಚುತ್ತಾ ಹೋದಂತೆ ತನ್ನ ಕಡೆ ಗಮನ ಕೊಡುವುದನ್ನೇ ಕಡಿಮೆ ಮಾಡಿಬಿಡುತ್ತಾಳೆ ಹೆಣ್ಣು. ಪರಿಣಾಮ ಆಕೆಯ ಸೌಂದರ್ಯದ ಜೊತೆ ಆರ