ಪೋಸ್ಟ್‌ಗಳು

ಲೇಖನ: "ಸತ್ತವರನ್ನು ನೆನಪಿಸುವ ಹ್ಯಾಲೋವೀನ್ ಹಬ್ಬ"

ಇಮೇಜ್
ಜನರ ದೈನಂದಿನ ಅಥವಾ ವಿಶೇಷ ಆಚರಣೆಗಳು ದೇಶದಿಂದ-ದೇಶಕ್ಕೆ, ಪ್ರದೇಶದಿಂದ-ಪ್ರದೇಶಕ್ಕೆ ಬದಲಾಗುತ್ತದೆ. ಆದರೂ ಅವುಗಳ ಉದ್ದೇಶ ಮಾತ್ರ ಒಂದೇ ಇರುತ್ತದೆ. ಒಂದೇ ಆಚರಣೆಯನ್ನು ನಾವು ಹಲವು ರೀತಿಯಲ್ಲಿ ಆಚರಿಸುತ್ತೇವೆ. ಉದಾಹರಣೆಗೆ ಹೊಸವರ್ಷದ ಆಚರಣೆಯನ್ನು ತೆಗೆದುಕೊಂಡರೆ ಎಲ್ಲಾ ದೇಶದವರೂ, ಎಲ್ಲಾ ಧರ್ಮದವರೂ ಹೊಸವರ್ಷ ಆಚರಿಸುತ್ತಾರೆ. ಆದರೆ ಆಚರಿಸುವ ರೀತಿ ಮಾತ್ರ ಬೇರೆ ಬೇರೆಯಷ್ಟೇ. ಏಕೆಂದರೆ ನಾವೆಲ್ಲರೂ ಒಂದೇ ಮಾನವ ಜಾತಿಗೆ ಸೇರಿದ್ದೇವೆ. ಅರಿತೋ ಅರಿವಿಲ್ಲದೆಯೋ ವಿಶ್ವಾಂದ್ಯಂತ ನಮ್ಮ ಆಚರಣೆಗಳು ಸಮಾನತೆ ಹೊಂದಿವೆ. ಅದೇ ರೀತಿ ನಾವು ಮಹಾಲಯ ಅಮಾವಾಸ್ಯೆಯಲ್ಲಿ ಪಿತೃಗಳನ್ನು ನೆನೆಸಿಕೊಂಡ ಹಾಗೆ ಪಾಶ್ಚಾತ್ಯರೂ ಸಹ ಒಂದು ಆಚರಣೆ ಮೂಲಕ ಗತಿಸಿ ಹೋದ ತಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತಾರೆ. ಆ ಮೂಲಕ‌ ತಮ್ಮ ಹಿರಿಯರ ಜೀವನ ವಿಧಾನವನ್ನು ತಮ್ಮ ಮಕ್ಕಳಿಗೆ ಪರಿಚಯಿಸುತ್ತಾರೆ. ಅದೇ "ಹ್ಯಾಲೋವೀನ್ ಹಬ್ಬ". ಅಕ್ಟೋಬರ್ ಮೂವತ್ತೊಂದರಂದು ಇದನ್ನು ಪ್ರಪಂಚದಾದ್ಯಂತ ಕೆಲವು ದೇಶಗಳಲ್ಲಿ ಆಚರಿಸಲಾಗುತ್ತದೆ. "ಹ್ಯಾಲೋವೀನ್"ನ ನಿಜವಾದ ಅರ್ಥ 'ಹ್ಯಾಲೋವ್ ಈವ್' ಎಂದರೆ 'ಸಂತರ ಸಾಯಂಕಾಲ' ಎಂದು. ಬೆಳಕಿನ ಅರ್ಧ ವರ್ಷ ಮುಕ್ತಾಯವಾದ ನಂತರ ಕತ್ತಲೆಯ ಅರ್ಧ ವರ್ಷ ಶುರುವಾಗುವ ಮೊದಲನೇ ದಿನ ಇದನ್ನು ಆಚರಿಸಲಾಗುತ್ತದೆ. ಈ ಆಚರಣೆ ಇದೀಗ ವಿಶ್ವದ ಗಮನ ಸೆಳೆದಿದೆ. ಭೂತಗಳ ವೇಷ: ಈ ಆಚರಣೆಯಲ್ಲಿ ಹಲವು ಸ್ವಾ

"ಡ್ರಾಗನ್ ಫ್ಲೈ: ಶನಿಗ್ರಹದಲ್ಲೊಂದು ಸುತ್ತು" (Dragon fly Mission)

ಇಮೇಜ್
ಸದಾ ಹೊಸತನ್ನು ಹುಡುಕಾಡುವುದು ಮನುಷ್ಯನ ಲಕ್ಷಣಗಳಲ್ಲಿ ಒಂದು. ಹಾಗೆಯೇ ಕೈಗೆ ಸಿಕ್ಕ ವಸ್ತುವಿನ ಮೇಲೆ ನಿರ್ಲಕ್ಷ್ಯ ವಹಿಸಿ ಮತ್ತೆ ಹೊಸದನ್ನು ಹುಡುಕಲು‌ ಹೊರಡುವುದೂ ಸಹ ಅವನ‌ ಲಕ್ಷಣವೇ. ಮಾನವ ಮೊದಲ ಬಾರಿಗೆ ಈ ಭೂಮಿ ಮೇಲೆ ಜನ್ಮ ತಾಳಿದಾಗ ಭೂಮಿ ಸ್ವರ್ಗ ಸದೃಶವಾಗಿತ್ತು. ಆದರೆ ತನ್ನದೇ ದುರಾಸೆಗಳಿಂದ ಭೂಮಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ ನರಕಕ್ಕಿಂತಲೂ ಕಡೆಯಾಗಿಸಿದ್ದಾನೆ. ಈಗ ಕುಡಿಯಲು ನೀರಿಲ್ಲದೇ, ವಾತಾವರಣ ವೈಪರೀತ್ಯದಿಂದ ಬದುಕಲು ಆಗದೇ ಪರದಾಡುತ್ತಿದ್ದಾನೆ. ಹವಾಮಾನ ಹೊಂದಿರುವ ಮತ್ತೊಂದು ಗ್ರಹ ಸಿಕ್ಕರೆ ಹಾರಿಬಿಡೋಣ ಎಂದುಕೊಳ್ಳುತ್ತಿದ್ದಾನೆ. ಅದಕ್ಕಾಗಿ ಸೌರವ್ಯೂಹದ ಒಳಗೆ ಮತ್ತು ಸೌರವ್ಯೂಹದ ಹೊರಗೂ ಸಹ ಹುಡುಕಾಟ ನಡೆಸುತ್ತಲೇ ಇದ್ದಾನೆ. ಆದರೆ ಕೊಟ್ಟ ಗ್ರಹವನ್ನು ಇಟ್ಟುಕೊಳ್ಳಲು ಬಾರದವರಿಗೆ ಮತ್ತೊಂದು ಗ್ರಹ ಸಿಕ್ಕರೆ ಅದನ್ನೂ ಹಾಳುಗೆಡುವುದಿಲ್ಲ ಅಂತ ಗ್ಯಾರಂಟಿ ಏನಿದೆ? ಹೊಸಗ್ರಹದ ಅನ್ವೇಷಣೆ ಇದೇ ಮೊದಲಲ್ಲ: ಜೀವಿಸಲು ಇರುವ ಅತ್ಯುತ್ತಮ ವಾತಾವರಣ ಹೊಂದಿರುವ ಭೂಮಿಯನ್ನು ಸರ್ವನಾಶ ಮಾಡಿದ ಮೇಲೆ ಬಹಳ ನಿಧಾನವಾಗಿ ಮನುಷ್ಯನಿಗೆ ಬೇರೆ ಗ್ರಹಗಳ ಮೇಲೆ ಗಮನ ಹರಿದಿದೆ. ಮನಸ್ಸು ಮಾಡಿದರೆ ಈ ಭೂಮಿಯನ್ನೇ ಮೊದಲಿನ ಹಾಗೆ ಸುಂದರವಾಗಿಸಬಹುದು. ಆದರೆ ಜನರಿಗೆ ಅದು ಬೇಕಿಲ್ಲ. ಬದಲಿಗೆ ದೂರದಲ್ಲೆಲ್ಲೋ ಮನುಷ್ಯ ಜೀವಿಸುವಂತಹ ವಾತಾವರಣ ಹೊಂದಿರುವ ಮತ್ತೊಂದು ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಹುಡುಕಾಟ ಇದೇ ಮೊದಲಲ್

ನೀರು ಲೋಹದ ಚಿಂತೆ - ಕವನ ಸಂಕಲನ (ಎಂ.ಎ.ಕನ್ನಡ)

ಲೇಖಕರ ಪರಿಚಯ : 'ನೀರು ಲೋಹದ ಚಿಂತೆ' ಕವನ ಸಂಕಲನವನ್ನು ಬರೆದಿರುವವರು " ವಿಜಯಾ ದಬ್ಬೆ " ರವರು. ಇವರು ಆಧುನಿಕ ಮಹಿಳಾ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾದ ಲೇಖಕಿ.‌ ಕನ್ನಡದಲ್ಲಿ ಸ್ರ್ತೀ ಸಾಹಿತ್ಯವನ್ನು ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು. " ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ " ಎಂಬ ಕೂಗು ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ವಿಜಯಾ ದಬ್ಬೆ ರವರು ಬರವಣಿಗೆಗೆ ಇಳಿದರು. ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಗ್ರಂಥ ಸಂಪಾದನೆ, ಅನುವಾದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದರು. ಇವರನ್ನು ಕೇವಲ ಕವಿ ಎಂದೋ ಅಥವಾ ವಿಮರ್ಶಕಿಯೆಂದೋ ಗುರುತಿಸುವುದು ಕಷ್ಟ. ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವುದರಿಂದ ಇವರನ್ನು ಅನನ್ಯ ಲೇಖಕಿ ಎನ್ನಬಹುದಾಗಿದೆ. ಕನ್ನಡ ಎಂ.ಎ ಅನ್ನು ಮಾನಸ ಗಂಗೋತ್ರಿಯಲ್ಲಿ ಮುಗಿಸಿದ ವಿಜಯ ದಬ್ಬೆಯವರು ಮುಂದೆ ಸುಪ್ರಸಿದ್ಧ ಸಾಹಿತಿಯಾದ ಡಾ. ಹಾ.ಮಾ.ನಾಯಕರ ನೇತೃತ್ವದಲ್ಲಿ " ನಾಗಚಂದ್ರ: ಒಂದು ಅಧ್ಯಯನ " ಎಂಬ ವಿಷಯದ ಮೇಲೆ ಅಧ್ಯಯನ ಕೈಗೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ವಿಜಯ ದಬ್ಬೆ ರವರ ಕವನಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಭಾಷೆಯ ಹಿತಮಿತವಾದ ಬಳಕೆ ಅವರ ಕವನಗಳಲ್ಲಿ ಎದ್ದು ಕಾಣುವ ಗುಣ. ಮತ್ತೊಂದು ಗುಣವೆಂದರೆ ಸಮಾನತೆಯ ದೃಷ್ಟಿಕೋನ. ಸ್ತ್ರೀತ್ವದ ಬಗೆಗಿನ ಪಾಪಪ್ರಜ್ಞೆಯಾಗಲೀ, ಗಂಡಸರ ಮೇಲಿನ ವ್ಯಂಗ್ಯವಾ

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಕವಿ ಪರಿಚಯ: ಪಕ್ಷಿಕಾಶಿ ಕವನ ಸಂಕಲನದ ಕವಿ ರಾಷ್ಟ್ರಕವಿ ಕುವೆಂಪು ರವರು.  ರಾಷ್ಟ್ರಕವಿ ಎನ್ನುವುದು ಸರ್ಕಾರ ಅವರಿಗೆ ಕೊಟ್ಟ ಬಿರುದಾದರೆ, ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಎಂಬುದು ಅವರ ಕಾವ್ಯನಾಮ. ಬೇಂದ್ರೆಯವರು ಹೇಳುವ ಹಾಗೆ ಕುವೆಂಪುರವರು " ಯುಗದ ಕವಿ.. ಜಗದ ಕವಿ.." ಎಂದೇ ಪ್ರಸಿದ್ಧರು.  ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆ ಕವಿಯ ಬದುಕನ್ನೇ ಬದಲಾಯಿಸಿತು. ತಮ್ಮ ಮೊದಲ ಕೃತಿಯಾದ ಅಮಲನ ಕಥೆಯನ್ನು " ಕಿಶೋರ ಚಂದ್ರವಾಣಿ " ಎಂಬ ಕಾವ್ಯನಾಮದಿಂದ ಅಚ್ಚು ಹಾಕಿಸಿದರು. ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆಯಲು ಆರಂಭಿಸಿದರು.‌ 1922 ರಿಂದ 1985 ವರೆಗೆ ಸುಮಾರು ಅರವತ್ತು ವರ್ಷಗಳಷ್ಟು ಕಾಲ ನಿರಂತರವಾಗಿ ಬರೆದರು. ನಾಟಕ, ಕಾವ್ಯ, ಮಕ್ಕಳ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.‌ 1945 ರಲ್ಲಿ ಬರೆದಿದ್ದ " ಶ್ರೀರಾಮಾಯಣ ದರ್ಶನಂ " ಮಹಾಕಾವ್ಯಕ್ಕೆ 1968 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪಕ್ಷಿಕಾಶಿ ಕವನಗಳು: ಪಕ್ಷಿಕಾಶಿಯಲ್ಲಿ ಸುಮಾರು 47 ಕವನಗಳಿವೆ. ಅವುಗಳ ಆಶಯಕ್ಕೆ ತಕ್ಕಂತೆ ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ: * ಸೂರ್ಯೋದಯ ಕುರಿತ ಗೀತೆಗಳು    (ಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ.      ಈ ಜಗಹೃದಯ, ಭಾದ್ರಪದದ ಸುಪ್ರಭಾತ,      ಈ

ನವೋದಯ ಕಾವ್ಯದ ಸ್ವರೂಪ ಮತ್ತು ಲಕ್ಷಣಗಳು

ಪೀಠಿಕೆ : ಇಂಗ್ಲೀಷ್ ಸಾಹಿತ್ಯದಿಂದ ಪ್ರಭಾವಗೊಂಡು ಹುಟ್ಟಿದ ಹೊಸ ಸಾಹಿತ್ಯ ಪ್ರಕಾರಕ್ಕೆ ' ನವೋದಯ ' ಸಾಹಿತ್ಯ ಎಂದು ಕರೆಯಲಾಗಿದೆ. ದಾಖಲಾತಿಯ ಕಾರಣಕ್ಕೆ ಬಿ.ಎಂ.ಶ್ರೀ ಅವರ 'ಇಂಗ್ಲೀಷ್ ಗೀತಗಳು' ಕವನ ಸಂಕಲನವನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಘಟ್ಟವಾದ 'ನವೋದಯದ' ಪ್ರಾತಿನಿಧಿಕ ಕವನ ಸಂಕಲನವೆಂದು ಪರಿಗಣಿಸಲಾಗಿದೆ. ಈ ಮೂಲಕ ಬಿ.ಎಂ.ಶ್ರೀ ಅವರನ್ನು ನವೋದಯದ ಹರಿಕಾರ ಎಂದು ಗುರುತಿಸಲಾಗಿದೆ. ಬಿ.ಎಂ.ಶ್ರೀ-----> ನವೋದಯದ ಹರಿಕಾರ. ಇಂಗ್ಲೀಷ್ ಗೀತಗಳು: ಇಂಗ್ಲೀಷ್ ಗೀತಗಳು  ಆಧುನಿಕ ಕನ್ನಡ ಸಾಹಿತ್ಯಕ್ಕೆ ಒಂದು ಸ್ಪಷ್ಟವಾದ ಮಾದರಿಯ ಮಾರ್ಗವನ್ನು ತೋರಿಸಿತು ಎನ್ನಬಹುದು. ಆಗ ಆ ಮಾರ್ಗದ ಅವಶ್ಯಕತೆಯೂ ಇತ್ತು. ' ಇಂಗ್ಲೀಷ್ ಗೀತಗಳು ' ಕವನ ಸಂಕಲನದಲ್ಲಿನ ಕವನಗಳು ಇಂಗ್ಲೀಷ್ ಸಾಹಿತ್ಯದ ಅನುವಾದ ಅನ್ನುವುದಕ್ಕಿಂತ ಪ್ರೇರಣೆ ಪಡೆದು ರಚಿಸಿದ ಕವನಗಳು ಎನ್ನಬಹುದು. ಆದರೆ ಅವುಗಳಿಗೆ ಪ್ರೇರಣೆಯಾಗಿ ಪಡೆದಿದ್ದು ಪ್ರಸಿದ್ಧರ ಕವನಗಳನ್ನಲ್ಲ. ಬಿ.ಎಂ.ಶ್ರೀ ಅವರ ಪ್ರಕಾರ ಅವರ ಉದ್ದೇಶ ಇದ್ದಿದ್ದು ಇಷ್ಟೇ. ಇಂಗ್ಲೀಷಿನಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಹೊಸ ಸಾಹಿತ್ಯ ಪ್ರಕಾರವನ್ನು ಸೃಜಿಸುವುದು. ಅದನ್ನು "ಇಂಗ್ಲೀಷ್ ಗೀತಗಳು" ಯಶಸ್ವಿಯಾಗಿ ಮಾಡಿತು. ಭಾಷೆಯ ಶೈಲಿ, ಕಥಾವಸ್ತು, ಛಂದಸ್ಸು ಮೊದಲಾದ ವಿಷಯಗಳಲ್ಲಿ ಹೊಸ ಸಂಗತಿಗಳನ್ನು ಪ್ರಸ್ತಾಪಿಸಿತು‌. ಇದು ಕವ

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾಷೆಯ ಮೂಲರೂಪವನ್ನು ಪೂರ್ವದ ಹಳೆಗನ್ನಡ ಎಂದುಕೊಂಡರೆ, ನಂತರದ ರೂಪವನ್ನು ಹಳೆಗನ್ನಡ ರೂಪ ಎಂದೂ, ಅದರ ಮುಂದಿನ ಸ್ವರೂಪವನ್ನು ನಡುಗನ್ನಡ ಸ್ವರೂಪವೆಂದು, ಅದರ ನಂತರದ ರೂಪವನ್ನು ಹೊಸಗನ್ನಡ ರೂಪವೆಂದು ಗುರುತಿಸಲಾಗುತ್ತದೆ. * ಪೂರ್ವದ ಹಳೆಗನ್ನಡ * ಹಳೆಗನ್ನಡ * ನಡುಗನ್ನಡ * ಹೊಸಕನ್ನಡ " ಮಧ್ಯಕಾಲೀನ ಕನ್ನಡ ಸಾಹಿತ್ಯ " ದ ಕಾಲದ ಭಾಷೆಯನ್ನು ನಡುಗನ್ನಡ ಭಾಷೆ ಎಂದು ಗುರುತಿಸಬಹುದಾಗಿದೆ. ಈ ಭಾಷೆಯ ಮೊದಲ ಹಂತವು ವಚನಕಾರರ ಉಗಮದೊಂದಿಗೆ ಆರಂಭವಾಗಿದೆ. ಸಂಸ್ಕೃತದ ಪ್ರಭಾವ : ಕನ್ನಡ ಮಾತ್ರವಲ್ಲ, ಇತರ ಎಲ್ಲಾ ಭಾರತೀಯ ಭಾಷೆಗಳ ಮೇಲೆಯೂ ಸಂಸ್ಕೃತ ಪ್ರಭಾವ ಬೀರಿದ್ದ ಕಾಲವದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ಸಹ ಸಂಸ್ಕೃತದಿಂದ ಸ್ವತಂತ್ರವಾಗಿ ಯೋಚಿಸಲಾರದಷ್ಟು ಅನಿವಾರ್ಯತೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಸಾಹಿತ್ಯವು ಕೇವಲ ರಾಜಪರಂಪರೆಗಷ್ಟೇ ಸೀಮಿತವಾಗಿದ್ದುದರಿಂದ ಭಾಷೆಯು ಕ್ಲಿಷ್ಟವೂ, ಸಂಕೀರ್ಣವೂ ಆಗಿತ್ತು. ಸಾಹಿತ್ಯಕ್ಕೆ ಸಂಸ್ಕೃತ-ಪ್ರಾಕೃತಗಳೇ ಮೂಲ ಆಕರಗಳಾದುದರಿಂದ ಭಾಷೆಯು ಸಹಜವಾಗಿ ಸಾಕಷ್ಟು ಪ್ರೌಢವಾಗಿತ್ತು. ಜನಸಾಮಾನ್ಯನಂತೂ ಸಾಹಿತ್ಯದಿಂದ ತುಂಬಾ ದೂರ ಉಳಿದುಬಿಟ್ಟಿದ್ದ.  ಒಟ್ಟಿನಲ್ಲಿ ಸಂಸ್ಕೃತ ಭಾಷೆಯ ಶಿಷ್ಟತೆ ಕನ್ನಡ ಸಾಹಿತ್ಯದ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಯಾವುದೇ ಒಂದು ಸೃಜನಶೀಲ ಭಾಷೆಯ ಬೆಳವಣಿಗೆಗೆ ಈ ರೀತಿಯ ಪ್ರಭಾವ-ಪ್ರೇರಣೆಗಳು ಅವಶ್ಯಕ. ಇದರಿಂದ ಭಾಷೆ ಪಡೆದುಕೊಂಡಷ್ಟೂ ಗಟ್ಟಿಗ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)

ಪೀಠಿಕೆ : ಕಾವ್ಯಮೀಮಾಂಸೆ ಎಂದರೆ ಕಾವ್ಯವನ್ನು ಕುರಿತ ಚರ್ಚೆ ಎಂದರ್ಥ. ಕಾವ್ಯ ಎಂದರೇನು? ಅದು ಹೇಗೆ ನಿರ್ಮಿತಿಯಾಗುತ್ತದೆ? ಏಕೆ ನಿರ್ಮಿತಿಯಾಗುತ್ತದೆ? ಎಂಬ ಸಂಗತಿಗಳನ್ನು ಕುರಿತ ಚರ್ಚೆಯೇ " ಕಾವ್ಯ ಮೀಮಾಂಸೆ ". ಶಬ್ದಾರ್ಥ ಸಹಿತವಾದದ್ದು ಕಾವ್ಯ. ಆ ಕಾವ್ಯದ ಶಬ್ದಾರ್ಥ ಸ್ವರೂಪವನ್ನು ಕುರಿತ ಚರ್ಚೆಯೇ ಕಾವ್ಯಮೀಮಾಂಸೆ. ಕಾವ್ಯ ಅಥವಾ ಸಾಹಿತ್ಯದಲ್ಲಿ ನಮ್ಮ ಲೌಕಿಕ ವ್ಯವಹಾರದ ಮಾತುಗಳೇ ಕಂಡುಬಂದರೂ, ಅವು ಲೋಕ ಮತ್ತು ಶಾಸ್ತ್ರದಲ್ಲಿ ಕಂಡುಬರುವ ಶಬ್ದಾರ್ಥಕ್ಕಿಂತ ಭಿನ್ನವಾದ, ವಿಶಿಷ್ಟವಾದ ಒಂದು ಉಕ್ತಿ ವೈಚಿತ್ರ್ಯ ಹೊಂದಿರುತ್ತದೆ. ಯಾವ ಕಾರಣದಿಂದಾಗಿ ಕಾವ್ಯದ ಶಬ್ದಾರ್ಥವು ಲೌಕಿಕ ವ್ಯವಹಾರದ ಶಬ್ದಾರ್ಥದಿಂದ ಬೇರೆಯಾದ ಅರ್ಥ ಹೊಂದಿರುತ್ತದೆ‌ ಎಂಬ ರಹಸ್ಯ ಶೋಧನೆಯೇ "ಕಾವ್ಯ ಮೀಮಾಂಸೆಯ" ಮೊದಲ ಹೆಜ್ಜೆ. ಹೀಗೆ ಶಬ್ದಾರ್ಥಸಹಿತವಾದ ಕಾವ್ಯದ ಸ್ವರೂಪವನ್ನು ಕುರಿತು ಹಿಂದಿನಿಂದ ಇಂದಿನವರೆಗೂ ಸೂತ್ರಗಳು, ವ್ಯಾಖ್ಯಾನಗಳು ಬರುತ್ತಲೇ ಇವೆ. ಒಂದೊಂದು ಕಾಲದಲ್ಲಿಯೂ ಅಂದಂದಿನವರು ಕಾವ್ಯದ ಯಾವುದೋ ಲಕ್ಷಣವನ್ನು ಎತ್ತಿ ಹಿಡಿದು ಅದೇ ಕಾವ್ಯದ ಆತ್ಮ ಎಂದು ಹೇಳುತ್ತಾ ಬಂದಿದ್ದಾರೆ. ಏಕೆಂದರೆ ಇದುವರೆಗೂ ಯಾರಿಂದಲೂ ಕಾವ್ಯವನ್ನು ಕುರಿತು ಸಮರ್ಪಕವಾದ ಕೊನೆಯ ಸೂತ್ರವನ್ನು ಹೇಳಲು ಸಾಧ್ಯವಾಗಿಲ್ಲ.  ಭಾರತೀಯ ಕಾವ್ಯ