ಪೋಸ್ಟ್‌ಗಳು

ಪಕ್ಷಿಕಾಶಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಕವಿ ಪರಿಚಯ: ಪಕ್ಷಿಕಾಶಿ ಕವನ ಸಂಕಲನದ ಕವಿ ರಾಷ್ಟ್ರಕವಿ ಕುವೆಂಪು ರವರು.  ರಾಷ್ಟ್ರಕವಿ ಎನ್ನುವುದು ಸರ್ಕಾರ ಅವರಿಗೆ ಕೊಟ್ಟ ಬಿರುದಾದರೆ, ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಎಂಬುದು ಅವರ ಕಾವ್ಯನಾಮ. ಬೇಂದ್ರೆಯವರು ಹೇಳುವ ಹಾಗೆ ಕುವೆಂಪುರವರು " ಯುಗದ ಕವಿ.. ಜಗದ ಕವಿ.." ಎಂದೇ ಪ್ರಸಿದ್ಧರು.  ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆ ಕವಿಯ ಬದುಕನ್ನೇ ಬದಲಾಯಿಸಿತು. ತಮ್ಮ ಮೊದಲ ಕೃತಿಯಾದ ಅಮಲನ ಕಥೆಯನ್ನು " ಕಿಶೋರ ಚಂದ್ರವಾಣಿ " ಎಂಬ ಕಾವ್ಯನಾಮದಿಂದ ಅಚ್ಚು ಹಾಕಿಸಿದರು. ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆಯಲು ಆರಂಭಿಸಿದರು.‌ 1922 ರಿಂದ 1985 ವರೆಗೆ ಸುಮಾರು ಅರವತ್ತು ವರ್ಷಗಳಷ್ಟು ಕಾಲ ನಿರಂತರವಾಗಿ ಬರೆದರು. ನಾಟಕ, ಕಾವ್ಯ, ಮಕ್ಕಳ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.‌ 1945 ರಲ್ಲಿ ಬರೆದಿದ್ದ " ಶ್ರೀರಾಮಾಯಣ ದರ್ಶನಂ " ಮಹಾಕಾವ್ಯಕ್ಕೆ 1968 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪಕ್ಷಿಕಾಶಿ ಕವನಗಳು: ಪಕ್ಷಿಕಾಶಿಯಲ್ಲಿ ಸುಮಾರು 47 ಕವನಗಳಿವೆ. ಅವುಗಳ ಆಶಯಕ್ಕೆ ತಕ್ಕಂತೆ ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ: * ಸೂರ್ಯೋದಯ ಕುರಿತ ಗೀತೆಗಳು    (ಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ.      ಈ ಜಗಹೃದಯ, ಭಾದ್ರಪದದ...